ರಾಜ್ಯದಲ್ಲಿ ಆಕ್ಸಿಜನ್ ಕೊರತೆ ಹೆಚ್ಚಾಗುತ್ತಿದ್ದು, ಜನರ ಸಾವನ್ನಪ್ಪುತ್ತಿರುವ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗಿತ್ತಿದ್ದು , ನೂತನ ವಿಜಯನಗರ ಜಿಲ್ಲೆಯ ಹೊಸಪೇಟೆಯ ವಿಜಯನಗರ ಕಾಲೇಜಿನ ಆವರಣದಲ್ಲಿರುವ ಮರಗಳನ್ನು ಕಡಿದಿದ್ದಾರೆ.
ಹೌದು ವೀಕ್ಷಕರೇ, ರಾಜ್ಯದಲ್ಲಿ ದಿನದಿಂದ ದಿನಕ್ಕೆ ತನ್ನ ಆಟ್ಟಹಾಸವನ್ನು ಮೇರೆಯುತ್ತಿರುವ ಮಹಾಮಾರಿ ಕರೋನಾ ವೈರಸ್ ಸೊಂಕು ತಗುಲಿ ಜನರನ್ನು ಬಲಿ ಪಡಿಯುತ್ತಿದ್ದು, ಜನರಿಗೆ ಆಕ್ಸಿಜನ್ ನ ಕೊರತೆ ಹೆಚ್ಚಾಗುತ್ತಿದೆ. ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತವು ಆಕ್ಸಿಜನ್ ಗಾಗಿ ಹರಾಸಹಾಸ ಮಾಡುತ್ತಿರುವುದು ಒಂದು ಕಡೆ ಆದ್ರೆ, ವಿಜಯನಗರ ಕಾಲೇಜಿನ ಆವರಣದಲ್ಲಿರುವ ಸುಮಾರು 45 ವರ್ಷದ ಮರಗಳನ್ನ ಡೆವಲಪ್ಮೆಂಟ್ ಪ್ರಾಜೆಕ್ಟ್ ಗಾಗಿ ಅಧಿಕಾರಿಗಳು ಜೆಸಿಬಿಗಳ ಮೂಲಕ ಮರಗಳನ್ನ ಕಡಿಯುತ್ತಿರುವ ದೃಶ್ಯಗಳನ್ನು ಕಾಲೇಜಿನ ಇಂಜಿನಿಯರಿಂಗ್ ವಿದ್ಯಾರ್ಥಿಯೊರ್ವ ತನ್ನ ಮೊಬೈಲ್ ನಲ್ಲಿ ಸೇರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ. ಈಗ ಆ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಪುಲ್ ವೈರಲ್ ಆಗಿದ್ದು , ನಗರ ಸಭೆ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು ವಿರುದ್ದ ಜನರು ಅಕ್ರೋಶವನ್ನು ಹೊರಹಾಕುತ್ತಿದ್ದಾರೆ.
ಇನ್ನಾದರೂ ಅಧಿಕಾರಿಗಳ ಮೇಲೆ ಜಿಲ್ಲಾಡಳಿತ ಕ್ರಮ ಕೈಗೊಳ್ಳತ್ತಾ ಎಂದು ಕಾದು ನೋಡಾಬೇಕಾಗಿದೆ.












Comments