ಬಳ್ಳಾರಿ: ಕೊರೋನಾ ಗೆ ಅದೆಷ್ಟೋ ಜನ ಬಲಿಯಾಗಿದ್ದು, ಈಗಲೂ ಜನರು ಸಾವು-ನೋವನ್ನು ಅನುಭವಿಸುತ್ತಿದ್ದಾರೆ. ಇದನ್ನು ತಡೆಗಟ್ಟಲು ಸರ್ಕಾರ ವೀಕ್ ಎಂಡ್ ಲೊಕ್ಡೌನ್ ಮತ್ತು ಜನತಾ ಕರ್ಫ್ಯೂ ಕ್ರಮಗಳನ್ನ ಜಾರಿಗೆ ತಂದಿದ್ದಾರೆ. ಆದರೆ ಸಮಾಜ ಕಲ್ಯಾಣ ಸಚಿವ ಶ್ರೀ ರಾಮುಲು ಬಳ್ಳಾರಿಯಲ್ಲಿ,ಕೋವಿಡ್ ನಿಯಾಮಾವಳಿಗಳನ್ನ ಪಾಲಿಸದೆ, ಪಾಲಿಕೆ ಚುನಾವಣೆಯ ಪ್ರಚಾರ ನಡೆಸಿದ್ದಾರೆ.
ಸಮಾಜದ ಕಲ್ಯಾಣಕ್ಕಾಗಿ ಹೋರಾಡಬೇಕಾಗಿರುವ ಶ್ರೀ ರಾಮುಲು, ಸಮಾಜದ ದುಸ್ಥಿತಿಗೆ ಕಾರಣವಾಗಿದ್ದಾರೆ. ಪ್ರಚಾರದ ವೇಳೆಯಲ್ಲಿ ಹೆಚ್ಚಿನ ಸಂಖ್ಯೆ ಜನ ಸೇರಿದ್ದು, ಮಾಸ್ಕ್ ಧರಿಸದೇ ಶ್ರೀ ರಾಮುಲು ಜನರೊಂದಿಗೆ ಚುನಾವಣೆಯ ಅಭ್ಯರ್ಥಿಗಳ ಪರ ಪ್ರಚಾರ ಮಾಡಿದ್ದಾರೆ.
ನಾನೇನು ಮಾಡಲಿ ಬೇಡ ಬೇಡ ಅಂತ ಎಷ್ಟು ಹೇಳಿದರೂ ಸಹ ಜನರು ಮೈ ಮೇಲೆ ಬೀಳುತ್ತಿದ್ದಾರೆ. ಜನರು ನನ್ನ ಮಾತು ಕೇಳಲಿಲ್ಲ. ಮಾಸ್ಕ್ ತೆಗೀರಿ ಸೆಲ್ಫಿ ತೆಗೆದುಕೊಳ್ಳಬೇಕು ಅಂತ ಜನರು ಹೇಳುತ್ತಿದ್ದು, ನಾನು ಸಂಧಿಗ್ದ ಪರಿಸ್ಥಿಯಲ್ಲಿ ಸಿಕ್ಕಿಹಾಕಿಕೊಂಡಿದ್ದೆ. ಚುನಾವಣಾ ಅಂದ ಮೇಲೆ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಮಾಡುವುದು ನನ್ನ ಕರ್ತವ್ಯ ಎಂದು ಟ್ವಿಟ್ಟರ್ ನಲ್ಲಿ ಶ್ರೀ ರಾಮುಲು ಸಮರ್ಥನೆ ಕೊಟ್ಟಿದ್ದಾರೆ. ಶ್ರೀ ರಾಮುಲು ಮಾಡಿದ ಟ್ವೀಟ್ ಗೆ ನೆಟ್ಟಿಗರು ಕ್ಯಾಕರಿಸಿ ಉಗಿಯುತ್ತಿದ್ದಾರೆ.
ಸಾರ್ವಜನಿಕರಿಗೆ ಒಂದು ರೂಲ್ಸ್, ರಾಜಕಾರಣಿಗಳಿಗೆ ಒಂದು ರೂಲ್ಸ್ ಆ ಏನ್? ಸ್ವಾಮಿ ಇದು. ಜನ ನಾಯಕರೇ ಈ ರೀತಿ ಮಾಡಿದರೆ, ಇನ್ನೂ ಪ್ರಜೆಗಳ ಗತಿ ಏನು?. ಜನರು ತಪ್ಪು ಮಾಡಿದರೆ ಬುದ್ದಿ ಹೇಳಬೇಕಾದ ರಾಜಕಾರಣಿಗಳೇ ಕಾನೂನು ಬಾಹಿರವಾಗಿ ನಡೆದುಕೊಳ್ಳುತ್ತಿದ್ದಾರೆ.
This post was last modified on April 23, 2021 8:47 pm
India’s business and diplomatic circles converged in Mumbai as the Ambani family hosted Queen Rania… Read More
A copyright dispute involving veteran composer Ilaiyaraaja has resulted in a court granting an injunction… Read More
A report submitted by the Brihanmumbai Municipal Corporation has flagged repeated safety violations on the… Read More
Actor Salman Khan was seen visiting Salim Khan at Lilavati Hospital, accompanied by members of… Read More
Actor Ranveer Singh’s film Dhurandhar has made its digital debut, with the title now streaming… Read More
Director Gunasekhar’s latest film Euphoria has been released in theatres on February 6, marking his… Read More
This website uses cookies.